About the Author

70ರ ಹರೆಯದ ಕಾಸರಗೋಡಿನ ಹಿರಿಯ ಲೇಖಕ-ಬಿ. ನರಸಿಂಗರಾವ್. ನಿವೃತ್ತ ಬ್ಯಾಂಕ್ ಅಧಿಕಾರಿ. ಹಿಂದಿ, ಮಲಯಾಳಂ, ಇಂಗ್ಲಿಷ್ ಬಲ್ಲವರು. ಕನ್ನಡದಲ್ಲಂತೂ ಸುಮಾರು 2 ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ರಾಜಾ ರವಿವರ್ಮ (ಮಕ್ಕಳ ಪುಸ್ತಕ), ಶ್ರೀ ನಾರಾಯಣ ಗುರು (ಜೀವನ ಚರಿತ್ರೆ)-ಈ ಎರಡೂ ಕೃತಿಗಳನ್ನು ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅನೇಕ ಸ್ಮರಣ ಸಂಚಿಕೆಗಳನ್ನು ಸಂಪಾದಿಸಿದ್ದಾರೆ.

ಬಿ. ನರಸಿಂಗರಾವ್