About the Author

ಭಾಗ್ಯಜ್ಯೋತಿ ಹಿರೇಮಠ ಅವರು ಧಾರವಾಡದ ಗುಡಗೇರಿಯಲ್ಲಿ 1984 ರಲ್ಲಿ ಜನಿಸಿದರು. ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ್‌ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ‘ಕನ್ನಡ ಚಲನಚಿತ್ರರಂಗಕ್ಕೆ ನರಸಿಂಹರಾಜು ಅವರ ಕೊಡುಗೆ' ವಿಷಯದ ಮೇಲೆ ನಡೆಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ 'ಧ್ವನಿ' ಎಫ್.ಎಂ ಕೇಂದ್ರದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅನೇಕ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದಾರೆ. ಕವಿತೆ ಮತ್ತು ಬದುಕನ್ನು ಅಭೇದವಾಗಿ ಕಾಣುವ ಭಾಗ್ಯಜ್ಯೋತಿ, ಎರಡರಲ್ಲೂ ಉತ್ತಟತೆಯನ್ನೇ ಪ್ರಕಟಪಡಿಸುತ್ತಿದ್ದು,  2018 ರ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ ಸಂದಿದ್ದು ’ಪಾದಗಂಧ’ ಇವರ ಮೊದಲ ಕವನ ಸಂಕಲನ.

ಭಾಗ್ಯಜ್ಯೋತಿ ಹಿರೇಮಠ

Awards