About the Author

ಲೇಖಕಿ ಭವ್ಯಶ್ರೀ ಬಿ ಹರ್ಷ ಅವರು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಏನ್ ಹೊಸಕೋಟೆ ಹಾಗೂ ಅರಸೀಕೆರೆಗಳಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಅರಸೀಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇನಲ್ಲಿ ಪೂರ್ಣಗೊಳಿಸಿದರು. ತಿಪಟೂರಿನ ಕಲ್ಪತರು ಅಡವಪ್ಪ ಆರ್ಟ್ಸ್ & ಕಾಮರ್ಸ್ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಹಾಗೂ  ಕನ್ನಡ ವಿ.ವಿ ಯ ದೂರಶಿಕ್ಷಣ ಕೇಂದ್ರದಿಂದ ಎಂ.ಕಾಂ  ಪದವಿ ಪಡೆದರು.  ಪ್ರಸ್ತುತ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ’ಋಣಾನುಬಂಧ ’ ಕಾದಂಬರಿ  ಇವರ ಮೊದಲ ಕೃತಿ.

ಭವ್ಯಶ್ರೀ ಬಿ. ಹರ್ಷ

(06 Jun 1987)