About the Author

ಬೋಲ ಚಿತ್ತರಂಜನ್ ದಾಸ್ ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡದವರು.ತುಳು ಮತ್ತು ಕನ್ನಡ ಲೇಖಕರು. 2010 ರಲ್ಲಿ ನಡೆದ 16ನೇ ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2016 ಆಗಸ್ಟ್ 7 ರಂದು ಮರಣ ಹೊಂದಿದರು. 

ಕೃತಿಗಳು : ಪೊನ್ನು ಮಣ್ಣುದ ಬೊಂಬೆ (ತುಳು ನಾಟಕ), ಅಳಿದುಳಿದರು (ಕಾದಂಬರಿ), ಕುಡಿ (ಕಾದಂಬರಿ), ನೀರ್ (ತುಳು ನಾಟಕ), ಬಿನ್ನೆದಿ ( ತುಳು ಪ್ರಕಾರ), ಬಿನ್ನೆದಿ (ತುಳು ಪಾಡ್ದಾನ), ಅಮರ ಬೀರೇರ ಮಾಮನ್ನೆ( ಪಾಡ್ದನ), ಒಂಟಿ ಒಬ್ಬಂಟಿ (ಕಾದಂಬರಿ), ತಮ್ಮಲೆ ಅರುವಟ್ಟ ಕಟ್ಟ್ ( ಪ್ರಬಂಧ), ಶ್ರೀ ಮಧ್ವ ಭಾರತ ( ತುಳು ಪಾಡ್ದಾನ), ಅನ್ನಾರ್ಥಿ(ಕನ್ನಡ ಪಾಡ್ದನ), ಅತಿಶಯ (ಕಾದಂಬರಿ).

ಪ್ರಶಸ್ತಿ-ಪುರಸ್ಕಾರಗಳು: ತುಳು ಗೌರವ ಪ್ರಶಸ್ತಿ, ಕೃಷ್ಣ ವಾದಿರಾಜಾನುಗ್ರಹ ಪ್ರಶಸ್ತಿ ಹಾಗೂ  ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಬೋಲ ಚಿತ್ತರಂಜನ್ ದಾಸ್ ಶೆಟ್ಟಿ

(30 Aug 1944-07 Aug 2016)