About the Author

ಸಿ.ಜಿ.ವೆಂಕಟೇಶ್ವರ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯವರು. ಇವರದು ಮೂಲತಃ ರೈತಾಪಿ ಕುಟುಂಬ. ತುಮಕೂರಿನ ಕ್ಯಾತ್ಸಂದ್ರ ದಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದಾರೆ. ಗಜಲ್, ಹನಿಗವನ ಸೇರಿದಂತೆ ಸಾಹಿತ್ಯ ಹಾಗೂ ವೈಜ್ಞಾನಿಕ ಬರಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ರಂಗಭೂಮಿಯ ಕಲಾವಿದರು. 

ಕೃತಿಗಳು: ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್

ಪ್ರಶಸ್ತಿ-ಪುರಸ್ಕಾರ: ಕಾವ್ಯ ಚಿಂತಾಮಣಿ, ರಾಜ್ಯ ಪ್ರಶಸ್ತಿ,ಸಂಘಟನಾ ಚತುರ ರಾಜ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ. 

ಸಿ.ಜಿ.ವೆಂಕಟೇಶ್ವರ