About the Author

ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರು ಮೈಸೂರು ಜಿಲ್ಲೆ ಕೆ.ಆರ್. ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸುರೇಶಾಚಾರಿ. ತಾಯಿ ಮೀನಾಕ್ಷಿ. ಮೂಲತಃ ರೈತ ಕುಟುಂಬದವರಾದ ಚಂದ್ರಶೇಖರ ಅವರು ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ವಿಜಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಣೆ. ಸಾಹಿತ್ಯ - ಓದು - ಬರೆವಣಿಗೆಯಲ್ಲಿ ಆಸಕ್ತಿ. ಸಮಾಜದ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸಿ ಲೇಖನ ಹಾಗೂ ಕವನದ ಮೂಲಕ ಸ್ಪಂದಿಸುವ ಸಹೃದಯತೆ ಅವರದ್ದು. ‘ಅನಾಥ’ ಅವರ ಚೊಚ್ಚಲ ಕೃತಿ.

ಚಂದ್ರಶೇಖರ ಗಂಧನಹಳ್ಳಿ

Books by Author