About the Author

ಲೇಖಕ ಚಂದ್ರಶೇಖರ ಪಾತೂರು ಅವರು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲ್ಲೂಕಿನ ಪಾತೂರು ಗ್ರಾಮದವರು. ಇವರು 1969 ಜೂನ್‌ 4ರಂದು ಜನಿಸಿದರು. ಬಿ.ಎ. ಪದವೀದರರಾಗಿರುವ ಇವರು ಪ್ರಸ್ತುತ ಸರ್ಕಾರಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕತೆ, ಕವನಗಳು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತುಳು ನಾಟಕ, ಹಾಡು ಬರೆಯುವುದು, ಚಿತ್ರರಚನೆ ಪ್ರಮುಖ ಹವ್ಯಾಸಗಳು. ತೀರ್ಪು (ಕತಾ ಸಂಕಲನ) ಮತ್ತು ಬದುಕಿನ ಬೆಲೆಯನೇನಾದರೂ ಬಲ್ಲಿರಾ (ಅಂಕಣ ಬರಹಗಳ ಸಂಕಲನ) ಇವರು ರಚಿಸಿದ ಪ್ರಮುಖ ಕೃತಿಗಳು.

ಚಂದ್ರಶೇಖರ ಪಾತೂರು

(04 Jun 1969)