About the Author

ಲೇಖಕ ಚಂದ್ರಶೇಖರ ಎಸ್‌.ಅಂತರ, ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ʼಅಂತರʼ ನಿವಾಸಿ. ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ (ಪತ್ರಿಕೋದ್ಯಮ) ಪದವೀಧರರು. ಸಮಾಜದ ಸಮಸ್ಯೆಗಳು-ಪರಿಹಾರ ಕುರಿತ ಲೇಖನಗಳು, ಸಂದರ್ಶನ, ಉದಯೋನ್ಮುಖ ಪ್ರತಿಭೆಗಳ, ಸಾಧಕರ ಪರಿಚಯಾತ್ಮಕ ಬರಹಗಳು ಪ್ರಕಟವಾಗಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದರು. ಸದ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾರವಾಗುತ್ತಿರುವ ʼಮಂಜುವಾಣಿʼ ಕನ್ನಡ ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕರು.

ಕೃತಿಗಳು: ಸಾಧನೆಯ ಪಥದಲ್ಲಿ ಸುವರ್ಣ ಹೆಜ್ಜೆಗಳು (ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಾಧನೆಗಳ ಕುರಿತ ಕೃತಿ)

ಚಂದ್ರಶೇಖರ ಎಸ್‌.ಅಂತರ