About the Author

ಜಾನಪದ ವಿದ್ವಾಂಸ, ರಂಗಕರ್ಮಿ ಚಂದ್ರು ಕಾಳೇನಹಳ್ಳಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸೋಲಿಗರ ಜಾನಪದ ಎಂಬ ಪ್ರೌಢಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ನಗರ ಜಾನಪದ, ತಂಬೂರು ಕಾವ್ಯಗಳು, ಜಾನಪದ ಪ್ರವೇಶ ಎಂಬ ಜಾನಪದ ಕೃತಿಗಳನ್ನು ರಚಿಸಿದ್ದಾರೆ. ಎಲ್ಲರೂ ನಮ್ಮವರೇ, ಕಳಕೊಂಡವರು, ಮಾಯಾಕಿನ್ನರಿ, ಕಲಿವೀರಜುಂಬಪ್ಪ ಮತ್ತು ಸಂಭವಾಮಿ ಯುಗೇಯುಗೇ ಎಂಬ ನಾಟಕಗಳನ್ನು ರಚಿಸಿದ್ದಾರೆ. 

ಇವರಿಗೆ ಯಕ್ಷಗಾನ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. 

ಚಂದ್ರು ಕಾಳೇನಹಳ್ಳಿ