About the Author

ಲೇಖಕ ಚನ್ನಬಸವ ಆಸ್ಪರಿ ಮೂಲತಃ ಕೊಪ್ಪಳ ಜಿಲ್ಲೆಯ ಬೇವಿನಹಾಳದವರು. ಕಾವ್ಯ, ಅನುವಾದ, ಆಧ್ಯಾತ್ಮ, ಉಪನ್ಯಾಸ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಜವಾಹರ್ ನವೋದಯ ವಿದ್ಯಾಲಯದಲ್ಲಿಪ್ರಾಥಮಿಕ-ಪ್ರೌಢಶಿಕ್ಷಣ, ಧಾರವಾಡದ ಕ.ವಿ.ವಿ.ಯಿಂದ ಬಿ.ಎ ಪದವಿ. (ಇಂಗ್ಲಿಷ್ ಸಾಹಿತ್ಯದಲ್ಲಿ ಬಂಗಾರದ ಪದಕ) ಶಿವಮೊಗ್ಗದ ಬಿ.ಇಡಿ ಕಾಲೇಜಿನಲ್ಲಿ ಪ್ರಶಿಕ್ಷಣ ಪೂರೈಸಿ, ಆಂಗ್ಲಭಾಷಾ ಶಿಕ್ಷಕರಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದಾರೆ. ಮೈಸೂರಿನ ಕ.ರಾ.ಮು ವಿಶ್ವವಿದ್ಯಾಲಯದಿಂದ  ಎಂ.ಎ, ಎಂ.ಇಡಿ ಪದವಿ ಹಾಗೂ ಭಾರತೀಯ ಭಾಷಾ ಸಂಸ್ಥಾನ ಮೈಸೂರಿನಿಂದ ತಮಿಳಿನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ Indian literature in English ನಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಿವೆ.

ಕೃತಿಗಳು: ಸಂತೆಯೊಳಗಣ ಮೌನ (ಕವನ ಸಂಕಲನ)

ಚನ್ನಬಸವ ಆಸ್ಪರಿ