About the Author

ಪುತ್ತೂರು ತಾಲೂಕಿನ ಮಾಡಾವಿನಲ್ಲಿ ಜನನ.  ಪ್ರಾಥಮಿಕ ವಿದ್ಯಾಭ್ಯಾಸವನ್ನು  ಸ.ಹಿ.ಪ್ರಾ ಶಾಲೆ ಪಡ್ಪಿನಂಗಡಿ ಹಾಗೂ ಹಂಟ್ಯಾರು,  ಪ್ರೌಢಶಿಕ್ಷಣವನ್ನು ಹಾಗೂ ಪದವಿಪೂರ್ವ ಶಿಕ್ಷಣವನ್ನು ಸ.ಪ.ಪೂ ಕಾಲೇಜು‌ ಕೊಂಬೆಟ್ಟುವಿನಲ್ಲಿ, ಪದವಿ ಶಿಕ್ಷಣವನ್ನು ಬೆಟ್ಪಂಪಾಡಿಯಲ್ಲಿ ಪೂರ್ಣಗೊಳಿಸಿದ್ದಾರೆ. ಎಂ.ಎ ಪದವಿಯನ್ನು ಮೈಸೂರಿನ ಮಾನಸ ಗಂಗೋಂತ್ರಿಯಲ್ಲಿ ಪಡೆದರು. ನಂತರ ಬದುಕಿನ ದಾರಿಗಾಗಿ ಮಂಗಳೂರಿನ ಸ್ವರೂಪ ಶಿಕ್ಷಣ ಕೇಂದ್ರದಲ್ಲಿ ಸಂಶೋದಕ ಶಿಕ್ಷಕನಾಗಿ 2010ರಲ್ಲಿ ಸೇರ್ಪಡೆಯಾದರು. ಪ್ರಸ್ತುತ ಜ್ಞಾನದೀಪ ವಿದ್ಯಾಸಂಸ್ಥೆ ಬೆಳ್ಳಾರೆಯಲ್ಲಿ ಉಪನ್ಯಾಸಕರಾಗಿದ್ದಾರೆ.

 ಕಲಾತ್ಮಕ ಬರವಣಿಗೆ ಶೈಲಿಯನ್ನು ರೂಪಿಸಿಕೊಂಡಿರುವ ಇವರು  ಪ್ರಶ್ನೆಗಳ  ಸುಳಿಯಲ್ಲಿ, ಹೆಣ್ಣು ಪ್ರಶ್ನೆಯಾದಳು, ಸ್ಮಶಾನ ಮೌನ, ಮತ್ತೆ ಸಿಕ್ಕಿದ ಅಮ್ಮ , ಎಂಟನೆಯ ಮಹಡಿ ಇನ್ನೂ ಅನೇಕ ಸಣ್ಣ ಕಥೆಗಳು, ಲೇಖನಗಳನ್ನು ಬರೆದಿರುತ್ತಾರೆ. ʼಮನವು ಮಾತಾಡಿತುʼ ಬರಹಗಳ ಗುಚ್ಚ ಕೃತಿಯನ್ನು ಬರೆದಿದ್ದಾರೆ. 

 


 

ಗಣೇಶ್‌ ನಾಯಕ್ . ಪಿ

(01 Oct 1988)