About the Author

ಎಚ್‌. ಪರಮೇಶ್ವರ ರವರು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ದೋಬೈಲು ಗ್ರಾಮ, ನೇರಲಸರದಲ್ಲಿ ಜನಿಸಿದರು. ತಂದೆ ಹೊನ್ನನಾಯ್ಕ, ತಾಯಿ ದೇವಮ್ಮ, ದೋಬೈಲು, ಹೊಸನಗರ ಶಾಲೆಗಳಲ್ಲಿ ಕ್ರಮವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜು ಹೊಸನಗರದಲ್ಲಿ ವ್ಯಾಸಂಗ ಮುಂದುವರಿಸಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿ, ಎಂ.ಎ, ಪದವಿ ಪಡೆದರು, ಡಾ. ಎ. ಸಿ. ನಾಗೇಶರವರ ಆತ್ಮೀಯ ವಿದ್ಯಾರ್ಥಿಯಾಗಿದ್ದು, ಅವರ ಮಾರ್ಗದರ್ಶನದಂತೆ ಚರಿತ್ರೆ ಉಳುಮೆಯಲ್ಲಿ ತೊಡಗಿರುವರು. ಚರಿತ್ರೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ಕಾಳಜಿ ಹೊಂದಿದ್ದು, ವಸುನಿಷ್ಠ ಮತ್ತು ವೈಚಾರಿಕ ಇತಿಹಾಸವನ್ನು ಪ್ರತಿಪಾದಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನ ಪೊಲೀಸ್‌ ಇಲಾಖೆಯ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿ: ಚರಿತ್ರೆ ದರ್ಶನ ಕಲೆ ಮತ್ತು ಸಂಶೋಧನಾ ಮಾರ್ಗ

ಎಚ್‌. ಪರಮೇಶ್ವರ