About the Author

ಎಚ್‌. ಆರ್‌. ಚಲವಾದಿ ಅವರು ಥಾಣೆ ಜಿಲ್ಲೆಯ ಅಂಬರನಾಥ ನಗರದ ಪರಿಷತ್ತಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು ಅವರ ಸಾಹಿತ್ಯ ಕೃಷಿಕತನ ಮಾತ್ರ ನಿವೃತ್ತಿ ಹೊಂದಿಲ್ಲ. ಕನ್ನಡ ಭಾಷಾ ಪಠ್ಯ ಪುಸ್ತಕಗಳ ಅನೇಕ ಸಮಿತಿ ಸತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಶಿಕ್ಷಕರ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದು ಸಮಾಜ ಸಂಸ್ಥೆಯ ಅಧ್ಯಕ್ಷರಾಗಿ, ಶಿವಾಜಿ, ಪುಣೆ, ಶಾಹೂ, ಅಂಬೇಡ್ಕರ್‌ ಅವರ ಸಾಮಾಜಿಕ ಸಂಘಟನೆಯ ಸಲಹೆಗಾರರಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ‘ಆರದ ಕೆಂಡಗಳು’ ಕವನ ಸಂಕಲನ 2019ರಲ್ಲಿ ಪ್ರಕಟವಾಗಿದೆ.

ಎಚ್.ಆರ್‌. ಚಲವಾದಿ