About the Author

ಹೇಮಾ ಎಸ್, ಕನ್ನಡದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ಉಪನ್ಯಾಸಕಿಯಾಗಿ  ಹಾಗೂ ಆಕಾಶವಾಣಿಯಲ್ಲಿ ಕೆಲವು ಕಾಲ ಉದ್ಘೋಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿಯಿಂದ ಲೇಖನ, ಕಥೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವು ಮಯೂರ, ಪ್ರಜಾವಾಣಿ, ಅವಧಿ, ಕಸ್ತೂರಿ, ಕೆಂಡಸಂಪಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಂಡಸಂಪಿಗೆಯಲ್ಲಿ ಅಕಿರ ಕುರಸೊವನ ಆತ್ಮಕತೆಯ ಅನುವಾದದ ಸರಣಿ ಪ್ರಕಟವಾಗುತ್ತಿದೆ. ಅಬ್ಬಾಸ್‌ ಕಿರಸ್ತೋಮಿಯ ಪದ್ಯಗಳ ಅನುವಾದ ʼಹೆಸರಿಲ್ಲದ ಹೂʼ ಸಂಚಯದಿಂದ ಪ್ರಕಟಗೊಂಡಿದೆ. ಜೊತೆಗೆ ಅನುವಾದಿತ ಕೃತಿ ‘ಉರಿವ ಬನದ ಕೋಗಿಲೆಗಳು’ಕೃತಿ ಸೃಷ್ಟಿ ಪ್ರಕಾಶನದಿಂದ ಪ್ರಕಟವಾಗಿದೆ.

ಹೇಮಾ. ಎಸ್‍