About the Author

ಹೇಮಾವತಿ ವೀ. ಹೆಗ್ಗಡೆ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಪೆರಾಡಿ ಬೀಡಿನವರು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪತ್ನಿ. ಧರ್ಮಸ್ಥಳದಲ್ಲಿ ‘ಕನ್ಯಾಕುಮಾರಿ ಯುವತಿ ಮಂಡಲ’ವನ್ನು ಪ್ರಾರಂಭಿಸಿ, ಧರ್ಮಸ್ಥಳದ ಯುವತಿಯರಿಗೆ ಮತ್ತು ಆಸಕ್ತ ಮಹಿಳೆಯರಿಗೆ ಸ್ವಉದ್ಯೋಗದ ಪರಿಕಲ್ಪನೆಯನ್ನು ಮೂಡಿಸಿದರು. ಓದಿನಲ್ಲಿ ವಿಶೇಷ ಆಸಕ್ತಿ ಇದ್ದು, ಅವರು ಉತ್ತಮ ಬರಹಗಾರರು, ಭಾಷಣಕಾರರೂ ಹೌದು. ಮಂಜುವಾಣಿ ಪತ್ರಿಕೆಯ ‘ಮಗಳಿಗೊಂದು ಪತ್ರ’ ಮತ್ತು ‘ನಿರಂತರ’ ಮಾಸಪತ್ರಿಕೆಯಲ್ಲಿ ‘ಗೆಳತಿ’ ಎಂಬ ಅಂಕಣದ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರು.

 ಕೃತಿಗಳು : ಗೆಳತಿ ಭಾಗ-1, ಗೆಳತಿ ಭಾಗ-2, ಗೆಳತಿ ಭಾಗ-3 (ಅಂಕಣ ಬರಹಗಳು)

ಪ್ರಶಸ್ತಿ-ಪುರಸ್ಕಾರಗಳು:  ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ, ಕಮಲ್ ಗೋಯೆಂಕಾ ಪ್ರಶಸ್ತಿ ಲಭಿಸಿವೆ.

 

ಹೇಮಾವತಿ ವೀ. ಹೆಗ್ಗಡೆ