About the Author

ಪುತ್ತೂರಿನ ನಿವೃತ್ತ ಉಪ ತಹಶೀಲ್ದಾರ್‌ ಜಗನ್ನಾಥ ರೈ ಅವರು ಕನ್ನಡ ಸಾಹಿತ್ಯದ ಎಂ.ಎ. ಪದವೀಧರರು. ಉಪ ತಹಶೀಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಕೃಷಿಯೊಂದಿಗೆ ತಮ್ಮದೇ ಸ್ವಂತ ಕಛೇರಿಯಲ್ಲಿ ಸಾರ್ವಜನಿಕರಿಗೆ ಕಂದಾಯ ಇಲಾಖಾ ಮಾಹಿತಿ ಮತ್ತು ಸೇವೆಗಳನ್ನು ಮುಂದುವರಿಸುತ್ತಿದ್ದಾರೆ. ಉದಯವಾಣಿ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಹಿಂದೆ (80ರ ದಶಕದ ತನಕ) ಲೇಖನ, ಕಥೆ, ಕವನಗಳನ್ನು ಬರೆದು ಪ್ರಕಟವಾಗುತ್ತಿದ್ದುದು ಈಗ ನೆನಪು. ಆನಂತರ ವೈಯಕ್ತಿಕ ಕಾರಣಗಳಿಂದ ಬರಹ ನಿಲ್ಲಿಸಿದರೂ ಸಾಹಿತ್ಯದ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಕೋಚಣ್ಣ ರೈಗಳ ಸಂಪರ್ಕಕ್ಕೆ ಸುಳ್ಯ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದ ಜಗನ್ನಾಥ ರೈಗಳು ಕೋಚಣ್ಣ ರೈಯವರ ಬದುಕು ಬರಹ ಕುರಿತು ಪುಸ್ತಕ ಪ್ರಕಟಿಸಿದ್ದಾರೆ.

ಜಗನ್ನಾಥ ರೈ