About the Author

ತುಮಕೂರಿನ ಮಹೇಶ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಡಾ. ಕೆ.ಪಿ ನಟರಾಜ್ ಅವರು ಎಂ.ಎ ಪದವೀಧರರು. ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಡಿ.ಲಿಟ್ (ಕುವೆಂಪು ಚಿಂತನೆಯ ಅಧ್ಯಾತ್ಮ ಕುರಿತು ಮಹಾಪ್ರಬಂಧ ಬರೆದಿರುತ್ತಾರೆ) ಪದವಿ ಪಡೆದಿರುವ ಅವರು ’ಓ ಕಪ್ಪು ಹುಡುಗಾ’, ’ಮತ್ತೆ ನನ್ನ ಆಕಾಶ’, ’ಶಿವೆ ಶಿವೆ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.  ’ಪ್ರತಿಮಾ ಮೋಹ’ ಇವರ ವಿಮರ್ಶಾ ಸಂಕಲನ. ’ಮಧುರ ಚೆನ್ನೈ’ ಸಂಪಾದಿತ ಕೃತಿ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ 2018ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕೆ.ಪಿ ನಟರಾಜ್ ಅವರ ’ನಿತ್ಯವೂ ನಿನ್ನೊಡನೆ’ ಕಾವ್ಯ ಸಂಕಲನ ಆಯ್ಕೆಯಾಗಿದೆ.

 

 

ಕೆ.ಪಿ. ನಟರಾಜ್