About the Author

ಕಾನಕಾನಳ್ಳಿ ಶಿವಾಮಾಧು ಅವರು 20-01-1991ರಂದು ಜನಿಸಿದರು, ಊರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳೆಬೇಕುಪ್ಪೆ ಗ್ರಾಮ. ತಂದೆ ಮಹಾದೇವಯ್ಯ, ತಾಯಿ- ಗೌರಮ್ಮ, ಬೇಸಾಯದ ಕುಟುಂಬದಲ್ಲಿ ಹುಟ್ಟಿದ ಶಿವಮಾಧು ಓದು, ಸಾಹಿತ್ಯದ ಅರಿವಿನಲ್ಲಿ ಮೊದಲಿನಿಂದಲೂ ಮುಂದು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಗಳಿಸಿರುವ ಅವರು ಹಂಪಿ ವಿಶ್ವವಿದ್ಯಾಲಯದಲ್ಲಿ ಶಾಸನಶಾಸ್ತ್ರದಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ, ಜೊತೆಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಜಾನಪದ ಅಧ್ಯಯನವನ್ನು ಮಾಡಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಯಾಗಿ ಓದು, ಬರಹವನ್ನು ತಮ್ಮ ಹವ್ಯಾಸವಾಗಿಸಿಕೊಂಡಿರುವ ಶಿವಮಾಧು ‘ಬಯಲ ಬಾಗಿಲು’ ಎಂಬ ವಿಮರ್ಶಾ ಲೇಖನಗಳ ಸಂಕಲನ ರಚಿಸಿದ್ದಾರೆ.

ಕಾನಕಾನಳ್ಳಿ ಶಿವಮಾಧು

(20 Jan 1991)

BY THE AUTHOR