About the Author

ಮುಂಬೈನ ಉದಯೋನ್ಮುಖ ಪ್ರತಿಭಾವಂತ ಲೇಖಕರಲ್ಲಿ ಕಲಾ ಚಿದಾನಂದ ಭಾಗ್ವತ್ ಅವರದು ಎದ್ದು ಕಾಣುವ ಹೆಸರು. ಮೂಲತಃ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಉತ್ಕಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ ಪದವಿ ಪಡೆದಿರುವ ಕಲಾ ಅವರು ಗಮಕ, ಸಂಗೀತ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವಿತೆ, ಕತೆ, ಬಿಡಿ ಬರಹಗಳು ಬೆಳಕು ಕಂಡಿವೆ.ʻವೈದ್ಯ ಭೂಷಣ ಡಾ. ಬಿ.ಎಂ ಹೆಗ್ಡೆ' ಇದು ಕಲಾ ಭಾಗ್ವತ್ ಅವರ ಚೊಚ್ಚಲ ಕೃತಿ (2021)

ಕಲಾ ಭಾಗ್ವತ್