About the Author

ಲೇಖಕ ಕಲ್ಲನಗೌಡ ಪಾಟೀಲರು ಪಂಚಾಯತ ಅಭಿವೃದ್ಧಿ ಅಧಿಕಾರಿ. ಧಾರವಾಡ ಜಿಲ್ಲೆಯ ಕೋಟೂರ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿ, ಉನ್ನತ ಶಿಕ್ಷಣವನ್ನು ಧಾರವಾಡದಲ್ಲಿ ಪೂರ್ಣಗೊಳಿಸಿದ್ದಾರೆ. ‘ಕನವರಿಕೆ’ಎಂಬುದು ಇವರ ಕವನ ಸಂಕಲನ. ತಮ್ಮ ಇಲಾಖೆ ಒದಗಿಸಿದ ಅವಕಾಶದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ, ಅಧ್ಯಯನದ ಭಾಗವಾಗಿ ಥೈಲ್ಯಾಂಡ್ ದೇಶದ ಬ್ಯಾಂಕಾಕನಲ್ಲಿ 2ನೇ ಅಕ್ಟೋಬರ್ 2019ರಂದು ನಡೆದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಉನ್ನತ ಶಿಕ್ಷಣ ಪಡೆಯುವಾಗಿನ ಪ್ರಯಾಸ ಮತ್ತು ಥೈಲ್ಯಾಂಡ್  ಪ್ರವಾಸ ಅನುಭವಗಳನ್ನು ‘ನವಿಲಿನಿಂದ ಗರುಡನೆಡೆಗೆ’ ಪ್ರವಾಸ ಕಥನ ಕೃತಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಕಲ್ಲನಗೌಡ ಪಾಟೀಲ

(04 Apr 1981)