About the Author

ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾದ ಇವರು ಮಾರ್ಚ್ 8,1985ರಂದು ಟಿ.ಎಚ್.ನಾಗರಾಜ್ ಹಾಗೂ ಟಿ.ಎನ್ ಕಮಲ ಅವರ ಮಗಳಾಗಿ ಜನಿಸಿದರು. ಪ್ರಾಥಮಕ ಶಿಕ್ಷಣದಿಂದ ತೊಡಗಿ ಡಿಗ್ರಿ ಶಿಕ್ಷಣದವರೆಗೂ ಪುತ್ತೂರಿನಲ್ಲೇ ಮುಂದುರಿಸಿದ್ದ ಅವರು ಸ್ನಾತಕೋತ್ತರ ಶಿಕ್ಷಣವನ್ನು ಇಂಗ್ಲೀಷ್ ವಿಷಯದಲ್ಲಿ ಪೂರ್ತಿಗೊಳಿಸಿದರು..ಅಲ್ಲದೆ ಬಿಎಡ್, ಎಂ ಎಡ್ ಶಿಕ್ಷಣವನ್ನೂ ಪೂರ್ತೀಕರಿಸಿದ್ದಾರೆ. ವೃತ್ತಿಯಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಇವರು ಆರು ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ನಿಪುಣರು.

ಪಂದನಲ್ಲೂರು ಮಾದರಿಯ ಭರತನಾಟ್ಯದಲ್ಲಿ ಸೀನಿಯರ್ ಮಾಡಿರು ಇವರು,ನೃತ್ಯ ನಿರ್ದೇಶನ, ಗಾಯಕಿ ಮಾತ್ರವಲ್ಲದೆ ಧ್ವನಿ ಕಲಾವಿದೆಯಾಗಿಯೂ ಹೆಸರು ಮಾಡಿದವರು. 8 ಭಾಷೆಗಳಲ್ಲಿ ಕಾರ್ಯಕ್ರಮದ ನಿರೂಪಣೆ ಸೇರಿ ಇದುವರೆಗೂ 287 ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿರುತ್ತಾರೆ. ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟಗೊಂಡಿರುವುದೇ ಅಲ್ಲದೆ 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕವಿತೆ’ ಪುಸ್ತಕದಲ್ಲಿಯೂ ಇವರ ಕವನಗಳು ಪ್ರಕಟವಾಗಿವೆ. ‘ಭಾವಬಿಂಬ’ಇವರ ಪ್ರಕಟಿತ ಕವನ ಸಂಕಲನ.

ಲಕ್ಷ್ಮಿ ಟಿ.ಎನ್

(08 Mar 1985)

Books by Author