About the Author

ಲಲಿತಾ ರೈ ಆರ್. ಅವರು ಪ್ರೌಢಶಾಲೆಯ ನಿವೃತ್ತ  ಅಧ್ಯಾಪಕಿ. 22-08-1928 ರಂದು ಮಂಗಳೂರಿನ ಕೊಡಿಯಾಲ ಬೈಲಿನಲ್ಲಿ ಜನಿಸಿದರು.

‘ಚಿತ್ತಗಾಂಗಿನ ಕ್ರಾಂತಿವೀರರು’, ‘ಕನ್ನಡ ಸಣ್ಣ ಕತೆಗಳ ಸಂಕಲನ-2', `ಮತ್ತೆ ಬೆಳಗಿತು', `ಸೊಡರು ಮತ್ತು ಇತರ ಕಥೆಗಳು', `ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು', `ತುಳು ಸಣ್ಣಕತೆಗಳ ಸಂಕಲನ-1', ಕೃತಿಗಳನ್ನು ಪ್ರಕಟಿಸಿದ್ದಾರೆ. ‘ದೇಸಾಂತರ’, ‘ಬೋಂಟೆ ದೇರೆಂಡ್’ ಅವರ ತುಳು ಕಾದಂಬರಿಗಳು.

ಅವರ ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ‘ಓಟು ಯಾರಿಗೆ’ ಕತೆಗೆ ಮೊದಲ ಬಹುಮಾನ ಸಂದಿದೆ.

ಲಲಿತಾ ರೈ ಆರ್

(22 Aug 1928)