About the Author

ಲೇಖಕರು ಓರ್ವ ಖ್ಯಾತ ಗಮಕ ವಿದ್ವಾನ್‍ ಆಗಿದ್ದು, 67 ವರ್ಷಗಳಷ್ಟು ಸುಧೀರ್ಘ ಗಮಕಿಯಾಗಿ ಸೇವೆ ಸಲ್ಲಿಸಿದವರು. ಇವರು ಗಮಕ ಕಲೆಯ ವಾಚನ ವ್ಯಾಖ್ಯಾನದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದರೂ, ಸಂಗೀತ ಕ್ಷೇತ್ರದಲ್ಲಿ ಅಪಾರವಾದ ವಿದ್ವತ್ತನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರೂ ಅವರ ವಿದ್ಯಾಭ್ಯಾಸಕ್ಕೂ ಅವರ ಪ್ರತಿಭೆಗೂ ಅಜಗಜಾಂತರ ವ್ಯತ್ಯಾಸ. 
ಇವರ ಗಮಕ ಕಲೆಯು ರಾಜ್ಯದ ಹಲವು ಖ್ಯಾತನಾಮ ಕವಿ, ಲೇಖಕರ ಪ್ರಶಂಸೆಗೆ ಒಳಗಾಗಿದೆ. ಗಮಕದ ಜೊತೆ ಜೊತೆಗೇ, ಸುಗಮ ಸಂಗೀತ ಹಾಗೂ ರಂಗ ಕ್ಷೇತ್ರದಲ್ಲೂ ಸಾಕಷ್ಟು ಪರಿಣಿತಿಯನ್ನು ಹೊಂದಿರುವ ರಾಯರು, ಅನೇಕ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ನೀಡಿದ್ದಾರೆ. ಕೇವಲ ಕರ್ನಾಟಕದಲ್ಲಿ ಅಲ್ಲದೇ ಹೊರ ರಾಜ್ಯಗಳಲ್ಲಿ ಕೂಡ ಇವರ ಸಂಗೀತ ಸುಧೆ, ಸಂಗೀತ ರಸಿಕರಿಗೆ ರಸದೌತಣ ನೀಡಿದೆ. 
ಟಿ.ಟಿ.ಡಿ. ದಾಸ ಸಾಹಿತ್ಯ ಯೋಜನೆಯ ಸಲಹಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಆಕಾಶವಾಣಿ ಆಡಿಶನ್‍ ಬೋರ್ಡ್‍ ಸದಸದಯರಾಗಿ, ಗಾನಕಲಾ ಸಿರಿಯ ಸಹ ಸಂಪಾದಕರಾಗಿ, ಗಮಕ ಕಲಾ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಜಯರಾಮ್‍ರಾವ್‍ ಅವರದು.

ಎಂ. ಎ. ಜಯರಾಮ್‍ರಾವ್‍