About the Author

ಆಂಧ್ರಪ್ರದೇಶದ  ಗಡಿಗ್ರಾಮ ಗೂಳ್ಯಂನಲ್ಲಿ  ಜನಿಸಿದ ಮಹ್ಮದ್ ಬಾಷ ಗೂಳ್ಯಂ ಅವರು ಕನ್ನಡ ಮಾಧ್ಯಮ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲೂ, 1994 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ 1994ರಲ್ಲಿ ಸ್ನಾತಕೋತ್ತರ ಪದವಿ;  ಇದೇ ವಿಶ್ವವಿದ್ಯಾಲಯದಿಂದ 1996 ರಲ್ಲಿ ಎಂಫಿಲ್( ವಿಯಷ: ಪುರಂದರ ದಾಸರು ಮತ್ತು ತ್ಯಾಗರಾಜರ ಕೀರ್ತನೆಗಳ ತೌಲನಿಕ ಅಧ್ಯಯನ) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ 2009ರಲ್ಲಿ ಪಿಎಚ್.ಡಿ (ವಿಷಯ: ಇಮ್ಮಡಿ ನಾಗವರ್ಮನ ಶಾಸ್ತ್ರ ಸಾಹಿತ್ಯ- ಒಂದು ಅಧ್ಯಯನ) ಪದವಿ ಪಡೆದಿದ್ದಾರೆ. ಸೈನಿಕ, ಗೀಯ ಗೀಯ, ಹಂತಕಿ, ಗ್ರಾಮ ದೇವತೆ ಸೇರಿದಂತೆ ಹಲವು ಚಿತ್ರಗಳಿಗೆ ಗೀತರಚನೆ. ಕಾಮನ ಬಿಲ್ಲು, ಮಡಿಲು, ಸಾಧನಾ, ಅರುಣ ರಾಗ, ನಾ ನಿನ್ನ ಬಿಡಲಾರೆ ಸೇರಿದಂತೆ  ಅನೇಕ ಮೆಗಾ ಧಾರಾವಾಹಿಗಳಿಗೆ ಶೀರ್ಷೀಕೆ ಗೀತೆ ರಚನೆ. ಇವು ಈ ಟಿವಿ, ಝೀ ಕನ್ನಡ, ದೂರದರ್ಶನ ಚಂದನದಲ್ಲಿ ಪ್ರಸಾರಗೊಂಡಿವೆ. ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲೇ ಮದ್ರಾಸಿನ ಚೆಂದ ಮಾಮ ಮಾಸಿಕದಲ್ಲಿ ಮೂರು ವರ್ಷ ಉಪ ಸಂಪಾದಕನಾಗಿ ಕೆಲಸ ಮಾಡಿದ ಅನುಭವ. ಹಲವು ವರ್ಷ ಬೆಂಗಳೂರಿನ ಪ್ರತಿಷ್ಠಿತ ಸಿನಿಮಾ ಮಾಸಿಕ ಅರಗಿಣಿಯಲ್ಲೂ, ಪ್ರಿಯಾಂಕ, ಸೂರ್ಯ ಮತ್ತಿತರ ಮಾಸಿಕಗಳಲ್ಲೂ ಕಾರ್ಯ ನಿರ್ವಹಣೆ. ಮಯೂರ, ಉದಯವಾಣಿ, ಸಂಜೆವಾಣಿ, ವಿಜಯ ಕರ್ನಾಟಕ ಸೇರಿ ಹಲವಾರು ವಿಶೇಷಾಂಕಗಳಲ್ಲಿ ಕತೆ, ಕವನ ಹಾಗೂ ಲೇಖನಗಳ ಪ್ರಕಟ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 15 ವರ್ಷಗಳಿಂದ ವೃತ್ತಿ ಜೀವನ,  ಪ್ರಸ್ತುತ ಚೀಫ್ ಕಾಪಿ ಎಡಿಟರ್ ಆಗಿ ಸೇವೆ.

ಅವರ ಪ್ರಕಟಿತ ಕೃತಿಗಳು- ಶಾಸ್ತ್ರ ಕಾರ ಇಮ್ಮಡಿ ನಾಗವರ್ಮ,  ಮಾಲೆ ಗಟ್ಟುವರ ಬೆವರು -ಕವನ ಸಂಕಲ, ಕನ್ನಡ ವ್ಯಾಕರಣ ಕುರಿತ ಕೃತಿ -ಶಾಸ್ತ್ರ ಸಾಹಿತ್ಯ, ವಾಗ್ಗೇಯಕಾರರ ವಾಙ್ಮಯ : (ಪುರಂದರ ದಾಸರು ಹಾಗೂ ತ್ಯಾಗರಾಜರ ಕೀರ್ತನೆಗಳ  ಪೂರ್ವಾಪರ-, ಸಂಭವ- ಎರಡನೇ ಕವನ ಸಂಕಲ, ಉತ್ಕ್ರಾಂತಿ- ಮೂರನೇ ಕವನ ಸಂಕಲನ, ಗೋಂದು -ಕಾದಂಬರಿ 

ಎಂ. ಮಹ್ಮದ್ ಬಾಷ ಗೂಳ್ಯಂ