About the Author

ಪ್ರೊ. ಎಂ.ಶಿವನಂಜಯ್ಯ ಅವರು ರಾಮನಗರ ಜಿಲ್ಲೆಯ ರಾಮನಗರ ತಾಲೂಕಿನ ಕೂಟಗಲ್ಲು ಗ್ರಾ,ಮದವರು. ತಮ್ಮ ಹಳ್ಳಿ ಸೇರಿದಂತೆ ಬೆಸಗರಹಳ್ಳಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಕೈಗೊಂಡಿದ್ದು, ರಾಜ್ಯದ ವಿವಿಧೆಡೆ ಉಪನ್ಯಾಸರಾಗಿ, ಪ್ರಾಧ್ಯಾಪಕರಾಗಿ ಹಾಗೂ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಕವನ ಸಂಕಲನ,ವಿಮರ್ಶೆ,ನಾಟಕ,ಕಾದಂಬರಿಗಳನ್ನು ಬರೆದಿದ್ದು, ಸಾಮಾಜಿಕ ಸಾಂಸ್ಕ್ರತಿಕ ಹಾಗೂ ಪರಿಸರವಾದಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಜಾನಪದ ಲೋಕದ ಆಡಳಿತಾಧಿಕಾರಿಯೂ ಆಗಿದ್ದಾರೆ.

ಎಂ. ಶಿವನಂಜಯ್ಯ