About the Author

ಲೇಖಕ ಮದನ ಕುಮಾರ ಅವರು ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಿಳಿಜಗಲಿಮೋಳೆ ಗ್ರಾಮದವರು. ತಂದೆ ರಾಮಶೆಟ್ಟಿ ತಾಯಿ ಸುಧಾ. ‘ಬಿರಾಸುಮಕು’ ಇವರ ಕಾವ್ಯನಾಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಪ್ರೌಢಶಾಲೆ ಸರಗೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ವಿಜಯನಗರದ ಸರ್ಕಾರಿ ಪ್ರ ದರ್ಜೆ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು. ನಂತರ ಅವರು ಬಿಪಿಎಡ್ ಪದವೀಧರರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ‘ಒಲವಿನ ಕವಿತೆ’ ಇವರ ಚೊಚ್ಚಲ ಕೃತಿ.

ಮದನ ಕುಮಾರ