About the Author

ಮಾಲತಿ ಹೆಗಡೆ ಮೂಲತಃ ಉತ್ತರ ಕನ್ನಡದವರು. ಸದ್ಯಕ್ಕೆ ಮೈಸೂರು ನಿವಾಸಿ. ಬಿ. ಎ ಪದವೀಧರೆ. ಹಾಡುವುದು ಬರೆಯುವುದು, ಓದುವುದು, ಕೈತೋಟದಲ್ಲಿ ಗಿಡಗಳನ್ನು ಬೆಳೆಸುವುದು ಪ್ರೀತಿಯ ಹವ್ಯಾಸ.

ಪ್ರಜಾವಾಣಿಯಲ್ಲಿ 'ವಿಭಿನ್ನ ನೋಟ ವಿಶಿಷ್ಟ ತೋಟ' 'ಮನೆ ಊಟ ಮನೆ ಮದ್ದು' 'ದೇಸಿ ಅಡುಗೆ'..ಅಂಕಣ ಬರಹ ಪ್ರಕಟವಾಗಿದೆ. ವಿಜಯವಾಣಿಯಲ್ಲಿ 'ಸಾಂಗತ್ಯ' ಅಂಕಣ ಬರಹ ಪ್ರಕಟವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಕರ್ಮವೀರ ಸುಧಾ...ಇವುಗಳಲ್ಲಿ ಕೃಷಿ, ಪರಿಸರ, ಮಹಿಳೆಯರ ಕುರಿತಾದ ಲೇಖನಗಳು, ಕಥೆ, ಕವಿತೆ, ಗಜಲ್ಗಳು ಪ್ರಕಟವಾಗಿವೆ.

'ವನಿತೆಯರ ಆತ್ಮಶ್ರೀ'( ಸಾಧಕಿಯರ ಬಗ್ಗೆ ಬರೆದ ಅಂಕಣಬರಹಗಳ ಸಂಗ್ರಹ) 'ನೆಲದ ನಂಟು'( ಕೃಷಿಕರ ಯಶೋಗಾಥೆಗಳು) ಪ್ರಕಟಿತ ಪುಸ್ತಕಗಳು . 'ತುತ್ತು ಎತ್ತುವ ಮೊದಲು' (ಮನೆ ಊಟ ಮನೆಮದ್ದು ಅಂಕಣ ಬರಹಗಳ ಸಂಕಲನ) ' ಅವನಿಯೊಡಲು( ಕಥಾ ಸಂಕಲನ) ಅಚ್ಚಿನಲ್ಲಿದೆ.

ಮಾಲತಿ ಹೆಗಡೆ