About the Author

ಕವಯತ್ರಿ ಮಾನಸ ಕೀಳಂಬಿ ಅವರು ಶಿವಮೊಗ್ಗ ಜಿಲ್ಲೆಯ ಕೀಳಂಬಿಯವರು. ತಂದೆ ಕೆ. ವಿ. ವಿಜಯೇಂದ್ರ, ತಾಯಿ ಉಮಾ. ವಿದ್ಯಾರ್ಥಿ ಇದ್ದಾಗ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿಧರರು. ಕನ್ನಡ ಕಾದಂಬರಿ ಆಧಾರಿತ ಚಲನಚಿತ್ರಗಳ ಅಧ್ಯಯನ (ಪ್ರಾತಿನಿಧಿಕ)” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರ ಸಂಶೋಧನಾ ಪ್ರಬಂಧ 'ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. “ಎಂ ಕೆ ಇಂದಿರಾ, ಬನಿಬರಹ” ಅವರ ಮತ್ತೊಂದು ಪ್ರಕಟಿತ ಕೃತಿ. ಕೆಲವು ಕಾಲ ಉಪನ್ಯಾಸಕಿಯಾಗಿಯೂ ಕೆಲಸ ನಿರ್ವಹಿಸಿರುವ ಅವರು ತಮಿಳುನಾಡು ಸರ್ಕಾರದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ‘ಸುಲಧವೇನೇ...?’ ಅವರ ಮೊದಲ ಕವನ ಸಂಕಲನ.

ಮಾನಸ ಕೀಳಂಬಿ