About the Author

ಮಾನಯ್ಯ ಬಿ. ಗೋನಾಲ ಮೂಲತಃ ಸುರಪುರ ತಾಲೂಕಿನ ಶಾಂತಪುರದವರು. ಸೊಂಡೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ, ಎಂ.ಫಿಲ್ ಪದವಿ ಪೂರೈಸಿದವರು. ಸದಾ ಅಧ್ಯಯನಶೀಲರಾಗಿದ್ದ ಮಾನಯ್ಯ ಅನಿವಾರ್ಯ ಸಂದರ್ಭದಲ್ಲಿ ಹುಟ್ಟೂರಿಗೆ ಮರಳಿ, ಅಲ್ಲಿಯೇ ಕೃಷಿಯಲ್ಲಿ ತೊಡಗಿಕೊಂಡವರು. ಕೃಷಿ ಬದುಕಿನ ನಡುವೆಯೂ ಓದುವ, ಒಂದಷ್ಟು ಬರೆಯುವ ಹವ್ಯಾಸವಿಟ್ಟುಕೊಂಡ ಮಾನಯ್ಯ ಸಾಹಿತ್ಯ ಕೃಷಿಗೂ ಕೆಲ ಸಮಯ ಮೀಸಲಿಟ್ಟ ಫಲವಾಗಿ ‘ಹೊನ್ಕಲ್ ರ ಕಥಾಲೋಕ’ ಕೃತಿ ಪ್ರಕಟಗೊಂಡಿದೆ.

ಮಾನಯ್ಯ ಬಿ.ಗೋನಾಲ