About the Author

ರಂಗಕರ್ಮಿ ಮಂಡ್ಯ ರಮೇಶ್ ಅವರು ಮೂಲತಃ ಮಂಡ್ಯದವರು. ರಂಗಭೂಮಿ ತಜ್ಞ, ನಟ, ನಿರ್ದೇಶಕ, ಕಲಾವಿದ, ಕಲಾಸಂಘಟಕ ಹಾಗೂ ರಂಗಶಿಕ್ಷಕ ಹೀಗೆ ಬಹುಮುಖ ಕಲಾವಿದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮನೆತನ, ಫೋಟೋಗ್ರಾಫರ್ ಪರಮೇಶಿ, ಮನೆತನ, ಮಂಥನ, ಒಂದೇ ಸುಳ್ಳು, ಜನನಿ, ಪಂಚರಂಗಿ, ಶ್ರೀರಸ್ತು ಶುಭಮಸ್ತು, ಇವಳು ಸುಜತಾ ಇನ್ನು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದು, ಪ್ರಸ್ತುತ ಕಲರ್‍ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ನಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೃತಿಗಳು :  ಕನವರಿಕೆ, ನಿರ್ದೇಶಿತ ನಾಟಕಗಳು : ಮಹಿಮಾಪುರ, ಮಾರನಾಯಕ, ಬಂಕಾಪುರದ ಬಯಲಾಟ, ಚೋರ ಚರಣದಾಸ, ನಾಗಮಂಡಲ, ಅಗ್ನಿ ಮತ್ತು ಮಳೆ, ಹರಕೆಯ ಕುರಿ, ಆಲಿಬಾಬ, ಯುಗಾಂತ, ಐಲುದೊರೆ, ಚಾಮಚೆಲುವೆ, ಸಾಯೋ ಆಟ, ವಲಸೆ ಹಕ್ಕಿಯ ಹಾಡು, ಈ ಕೆಳಗಿನವರು, ಊರು ಭಂಗ, ಸುಭದ್ರಾ ಕಲ್ಯಾಣ, ರತ್ನ ಪಕ್ಷಿ, ಅಂಧಯುಗ ಮುಂತಾದವು.

ಮಂಡ್ಯ ರಮೇಶ್

(14 Jul 1964)

Books by Author