About the Author

ಹಿರಿಯ ಪತ್ರಕರ್ತ, ಅಂಕಣಬರಹಗಾರ ಅರ್ಜುನ ದೇವ ಅವರು ಮೂಲತಃ ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಚೌಡದೇನಹಳ್ಳಿಯವರು. ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅರ್ಜುನ ದೇವ ಅವರು ಬರಹಗಳ ಮೂಲಕ ಜನಪ್ರಿಯರಾದವರು. ತಮ್ಮ ಪಕ್ವಗೊಂಡ ಅನುಭವಗಳೊಂದಿಗೆ ಅವರು ಹಲವು ಅಂಕಣಗಳನ್ನು ಬರೆದಿದ್ದಾರೆ. ಅವರ ಅಂಕಣ ಬರಹಗಳ ಸಂಕಲನ 'ಬದುಕು ಜಟಕಾಬಂಡಿ' ಜನಮನ್ನಣೆಗಳಿಸಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ ಅವರು ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಸುರ್ಯೋದಯ ಪತ್ರಿಕೆ ಸಂಪಾದಕರಾಗಿಯೂ ಕೆಲಸ ಮಾಡಿದ್ದ ಅವರು 2024 ಏಪ್ರಿಲ್ 24ರಂದು ಕೆಂಗೇರಿ ಉಪನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 

 

ಎನ್. ಅರ್ಜುನದೇವ