About the Author

ಕವಿ ನಾಗರಾಜ ಬಸರಕೋಡ 1979 ಜೂನ್ 30 ರಂದು ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಬೇನಾಳ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಎದೆಯ ಬೋಧಿ ಚಿಗುರು’ ಅವರ ಮೊದಲ ಕವನ ಸಂಕಲನ. ಅವರ ಹಲವಾರು ಕತೆ, ಕವಿತೆಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಓ ಮನಸೇ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ನಾಗರಾಜ ಬಸರಕೋಡ

(30 Jun 1979)