About the Author

ನಾರಾಯಣ ಜೋಶಿ ಅವರು ಮೂಲತಃ ಚಿತ್ರ ಕಲಾವಿದ, ಛಾಯಾಚಿತ್ರಗ್ರಾಹಕ ಹಾಗೂ ಹವ್ಯಾಸಿ ಪತ್ರಕರ್ತರು, ಕಲಬುರಗಿಯಲ್ಲಿ ವಾಸವಿರುವ ಅವರು ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಮತ್ತು ಗ್ರಾಮೀಣ ಅಭಿವೃಧ್ಧಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಬಿ. ಸುರೇಶ ಅವರ ನಿರ್ದೇಶನ ‘ಅರ್ಥ’ ಚಲನಚಿತ್ರದಲ್ಲಿ ಗೌರವ ನಟನಾಗಿ ಅಭಿನಯಿಸಿದ್ಧಾರೆ. ‘ಕಲಾ ದರ್ಪಣ’ ಎಂಬ ಕೃತಿಯನ್ನು ರಚಿಸಿದ್ದಾರೆ. 2015ರ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ ಕಲ್ಚರ್ ರಾಯಲ್ ಮೆರಿಟ್ ಪ್ರಶಸ್ತಿ, 2016 ರೋಟರಿಕ್ಲಬ್ ಹಾಗೂ ಇನ್ನರ್ ವ್ಹೀಲ್ ಮೆನ್ ಕ್ಲಬ್ ಕಲಬುರಗಿ ಸನ್ಮಾನ, 2017ರ ಬಹಮನಿ ಪೌಂಢೇಶನ ಗುಲಬರ್ಗಾ ಅನೋಮಲ್ ರತನ್ ಪ್ರಶಸ್ತಿ, 2017ರ ಕುಂಭಕಲಾ ಕೇಂದ್ರ ಕಲಬುರಗಿ ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ.  ಪ್ರಸ್ತುತ ಫ್ರೀಲಾನ್ಸ್ ಪೋಟೋಗ್ರಾಫರ್ ಆಗಿ ಕಲಬುರಗಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 

ನಾರಾಯಣ ಎಂ. ಜೋಶಿ