About the Author

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ತಂದೆ- ಹೆಚ್. ಸಂಜೀವ ದೇವಾಡಿಗ, ತಾಯಿ- ಪಾರ್ವತಿ ದೇವಾಡಿಗ. ಎಂ.ಕಾಂ. ಪದವೀಧರರು. ಸದ್ಯ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕನಾಗಿದ್ದಾರೆ. 

ಓದು, ಬರೆಹಗಳತ್ತ ಆಸಕ್ತಿ. ವೈಜ್ಞಾನಿಕ ಬರೆಹಗಳು ಸೇರಿದಂತೆ ವೈವಿಧ್ಯಮಯ ವಿಚಾರಗಳು ಕುರಿತಾಗಿ ಹಲವು ಲೇಖನಗಳನ್ನು ಬರೆದಿದ್ದು, ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಹೇಳದೆ ಹೋದ ಮಗಳಿಗೆ’ ಎಂಬ ಲೇಖನ ಸಂಕಲನ ಪ್ರಕಟಿಸಿದ್ದಾರೆ.

ನರೇಂದ್ರ ಎಸ್. ಗಂಗೊಳ್ಳಿ