About the Author

ಮೂಲತಃ ಉಡುಪಿಯವರಾದ ಪಿ.ಬಿ. ಪ್ರಸನ್ನ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡು ದಶಕಗಳಿಂದ ಕನ್ನಡ ಉಪನ್ಯಾಸಕರಾಗಿದ್ದಾರೆ.  ಹೆಗ್ಗಡದೇವನ ಕೋಟೆ, ಶಿರಸಿ, ದಕ್ಷಿಣಕನ್ನಡ ಜಿಲ್ಲೆಯ ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ಮೂಡಬಿದರೆಯ ನಿವಾಸಿ.

 'ಡೀಸೆಂಟಾಗಿ ಬಯ್ಯುವುದು', 'ಸುಳ್ಳಿಗೆ ಜಯವೆನ್ನಿ' ಇವರ ಹಾಸ್ಯ ಲೇಖನಗಳ ಸಂಕಲನಗಳು. 'ಗಣಪ ಮತ್ತು ಗಾಂಪ', 'ಮಣ್ಣಿಂದ ಕಾಯ', “ತನುವಿನೊಳಗೆ ಹುಸಿತುಂಬಿ' ಕಥಾಸಂಕಲನಗಳು. 'ಮಂಚ ಮತ್ತು ಒಡಲು' ಕವನ ಸಂಗ್ರಹ.

ಪಿ.ಬಿ ಪ್ರಸನ್ನ

(03 Dec 1969)