About the Author

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಪರಮಾನಂದ ಎಸ್. ಸರಸಂಬಿ ಅವರು ಕಕ್ಕರಸಾವಳಿಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಪ್ರಭಾರ) ಮುಖ್ಯಗುರುಗಳು.  ಡಿಎಡ್, ಬಿಎಡ್, ಎಂ.ಎ. ಪದವೀಧರರು. ಚಿಗುರೆಲೆ-ಇವರ ಪ್ರಥಮ ಕವನ ಸಂಕಲನ. ಕೆಕ್ಕರಸಾವಳಗಿಯ ಶಾಲಾ ಮಕ್ಕಳಿಂದ ಕಥೆಗಳನ್ನು ಬರೆಯಿಸಿ ಇವರು ಸಂಪಾದಿಸಿದ ಕೃತಿ-ಹಕ್ಕಿ ಹಿಂಡು, 2017ರಲ್ಲಿ ಬಾಲ ವಿಕಾಸ ಅಕಾಡೆಮಿ ಧನಸಹಾಯದಿಂದ ಪ್ರಕಟಗೊಂಡಿದೆ.  ಶಾಲೆ ಆವರಣದಲ್ಲಿ ಹಸಿರು ಉಳಿಸಲು ಹಲವು ಕಾರ್ಯಕ್ರಮಗಳು, ಜೊತೆಗೆ, ಸೇವಾದಳ ಹಾಗೂ ಸ್ಕೌಟ್ಸ್ ತರಬೇತಿಯೊಂದಿಗೆ ಸೇವೆ ನಿರ್ವಹಣೆ, ಕನ್ನಡ ಸಾಹಿತ್ಯ ಪರಿಷತ್ತು ಚವಡಾಪುರ ಘಟಕ ಗೌರವ ಕಾರ್ಯದರ್ಶಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಅಕ್ಷರ ದಾಸೋಹಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಸ್ಥೆ-ಸಂಘಟನೆಗಳಿಂದ ಹಲವಾರು ಪ್ರಶಸ್ತಿಗಳು ಸಂದಿವೆ. ಕಥೆ-ಕವನ-ಕಾದಂಬರಿ ರಚನೆ ಇವರ ಪ್ರಮುಖ ಹವ್ಯಾಸವಾಗಿದೆ.

ಪರಮಾನಂದ ಎಸ್. ಸರಸಂಬಿ

(12 Apr 1987)