About the Author

ಲೇಖಕ ಪ್ರಹ್ಲಾದ ಡಿ.ಎಂ. ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ (ಜನನ: 1993ರ ಮಾ.14 ) ಸುಟ್ಟ ಕರ್ನಾರಹಟ್ಟಿಯವರು. ಗ್ರಾಮದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ, ನಂತರ ಮೊಳಕಾಲ್ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.ಪದವೀಧರರು. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ ವಿಶ್ವವಿದ್ಯಾಲಯ ಹಂಪಿ ಜಾನಪದ ಅಧ್ಯಯನ ವಿಭಾಗದಲ್ಲಿ "ಬುಡಕಟ್ಟು ಸಮುದಾಯದ ಕಂಪಳದೇವರು: ಸಾಂಸ್ಕೃತಿಕ ಸಂಕಥನ" ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ’ಮೀನುಗಾರನ ಮೈನಕ್ಕಿ’ ಇವರ ಪ್ರಥಮ ಕವನ ಸಂಕಲನ.  ಅನುಸೃಷ್ಟಿ (ಲೇಖನಗಳ  ಸಂಪಾದಿತ ಕೃತಿ)

ಪ್ರಹ್ಲಾದ ಡಿ.ಎಂ.

(14 Mar 1993)