About the Author

ರಂಗಭೂಮಿ ನಟ, ನಾಟಕಕಾರ ಮತ್ತು ನಿರ್ದೇಶಕ. ತೊಗಲು ಬೊಂಬೆಯಾಟದಲ್ಲಿ ಆಸಕ್ತಿ. ನೀನಾಸಂ, ಹೆಗ್ಗೋಡಿನಲ್ಲಿ ರಂಗಶಿಕ್ಷಣ ತರಬೇತಿ. ರಂಗಭೂಮಿ ಕಲೆಯಲ್ಲಿ ಎಂ.ಎ ಪದವಿ. ಮಧುರೈ ವಿಶ್ವವಿದ್ಯಾಲಯದಿಂದ, ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಅಜ್ಜ ಸದಾಶಿವರಾಯರು ಮತ್ತು ತಂದೆ ಶ್ರೀಪಾದರಾಯ ಗರುಡ, ವೃತ್ತಿರಂಗಭೂಮಿಯ ಕಲಾವಿದರಾಗಿದ್ದು ಆ ಪರಂಪರೆಯ ಹಿನ್ನೆಲೆ ಇವರಿಗೂ ಇದೆ.

ತುಘಲಕ್, ಮೃಚ್ಛಕಟಿಕ ಇತ್ಯಾದಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಕಂಪನಿ ನಾಟಕಗಳಲ್ಲೂ ಅಭಿನಯಿಸಿದ ಅನುಭವ. ಹ್ಯಾಬ್ಲೆಟ್, ಒಥೆಲೊ ಹುಲಿಯ ನೆರಳು, ಚೂರಿಕಟ್ಟೆ ಇತ್ಯಾದಿ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಕೆ.ವಿ. ಸುಬ್ಬಣ್ಣ-ವ್ಯಕ್ತಿಚಿತ್ರ. ಮಾತಾಡು ಮಾತಾಡು ಗೊಂಬೆಯೇ, (ಶಿಕ್ಷಕರಿಗಾಗಿ ಗೊಂಬೆ ರಂಗಭೂಮಿಯ ಕೈಪಿಡಿ), ಗರುಡ ಸದಾಶಿವರಾಯರು-ವ್ಯಕ್ತಿಚಿತ್ರ, ಮೂರು ಕಿರುನಾಟಕಗಳು ಹಾಗೂ ದಾರಿಯೋಪೋನ ನಾಟಕದ ಭಾವಾನುವಾದ, ಬೆತ್ತಲಾಟ (ನಾಟಕ) ಮತ್ತೊಂದು ನಾಟಕ - ಶಾಂತ ಕವಿಗಳ ವಿಶ್ರಾಂತಿ-ಕನ್ನಡದ ಆದ್ಯ ನಾಟಕಕಾರ ಸಕ್ಕರಿ ಬಾಳಾಚಾರ್ಯ ಉರುಫ್ ಶಾಂತಕವಿಗಳ ಜೀವನ ಸಾಹಿತ್ಯ ಕುರಿತ ಜೀವನ ನಾಟಿಕೆ : ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ ಇವು ಇವರು ರಚಿಸಿರುವ ಕೆಲವು ಕೃತಿಗಳು.

ಈಗಲೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪ್ರಕಾಶ ಗರುಡ ಅವರು ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ

ಪ್ರಕಾಶ ಗರುಡ