About the Author

ಪ್ರವೀಣ್ ಕುಮಾರ್ ಮಾವಿನಕಾಡು ಪ್ರಸ್ತುತ ಸೌರಶಕ್ತಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು, ಸನ್ ಪ್ರೀತ್ ಸೋಲಾರ್ ಸಿಸ್ಟಮ್ಸ್ ಎನ್ನುವ ಸ್ಟಾರ್ಟಪ್ ಒಂದರ ಸಂಸ್ಥಾಪಕ ನಿರ್ದೇಶಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮುಖಾಂತರ ಪ್ರಸ್ತುತ ವಿದ್ಯಮಾನಗಳ ಕುರಿತು ನಿರಂತರವಾಗಿ ಬರಹಗಳನ್ನು ಪ್ರಕಟಿಸುತ್ತಾ ಬಂದಿದ್ದು, ಹೊಸದಿಗಂತ ದಿನಪತ್ರಿಕೆಯಲ್ಲಿ ಹುಳಿಮಾವು ಎನ್ನುವ ಹೆಸರಿನಲ್ಲಿ ಎರಡೂವರೆ ವರ್ಷ ವಾರದ ಅಂಕಣ ಪ್ರಕಟವಾಗಿದೆ. ಕಳೆದ ವರ್ಷ ಅಯೋಧ್ಯಾ ಪ್ರಕಾಶನ ಅದೇ ಅಂಕಣದ ಆಯ್ದ ಲೇಖನಗಳನ್ನೊಳಗೊಂಡ ಓಪನ್ ಚಾಲೆಂಜ್ ಎನ್ನುವ ಪುಸ್ತಕವನ್ನು ಪ್ರಕಟಿಸಿದೆ. ಅವರ ಲೇಖನಗಳು ವಿಕ್ರಮ, ಹೊಸದಿಗಂತ, ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು ; ಓಪನ್ ಚಾಲೆಂಜ್ ,ಅವಿತಿಟ್ಟ ಅಂಬೇಡ್ಕರ್

ಪ್ರವೀಣ್ ಕುಮಾರ್ ಮಾವಿನಕಾಡು