About the Author

ಕವಿ, ಲೇಖಕ ಪುತ್ತೂರು ಉಮೇಶ್‌ ನಾಯಕ್‌ ಅವರು ಮೂಲತಃ ಪುತ್ತೂರಿನ ದರ್ಬೆಯವರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿರುವ ಇವರು ಪ್ರಸ್ತುತ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಜೊತೆಗೆ ಶ್ರೀರಾಮ್ ಶೇರ್ ಅಂಡ್ ಫೈನಾನ್ಸಿಯಲ್ ಕನ್ಸಲ್ಟೆಂಟ್ ಎಂಬ ಶೇರು ಉದ್ಯಮವನ್ನು ನಡೆಸುತ್ತಿರುವ ಇವರು ಪುತ್ತೂರು ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡ ಇವರು ವಿವೇಕಾನಂದ IAS ಅಧ್ಯಯನ ಕೇಂದ್ರದ ಸಂಚಾಲಕರಾಗಿ, ರೋಟರಿ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್- ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ ಇದರ  ಸಂಚಾಲಕರಾಗಿಯೂ ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮದ ವಿಶ್ವಸ್ಥ ಮಂಡಳಿ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಈ ಎಲ್ಲಾ ಸೇವೆಗಾಗಿ ರೋಟರಿ ಕ್ಲಬ್‌ ಅವರಿಂದ 2021ನೇ ಸಾಲಿನ ʼದಿ ಅನ್‌ಸಂಗ್ ಹೀರೋʼ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಕೃತಿಗಳು: ಸ್ವಯಂಭೂ ಮಹಾಲಿಂಗೇಶ್ವರ ( ಸಂಗ್ರಹ ಕೃತಿ), ಕನಸಿನ ಕವನಾಮೃತ, ಮನಸ್ಸಿನ ಭಾವಮೃತ (ಕವನ ಸಂಕಲನ), 

ಪುತ್ತೂರು ಉಮೇಶ್‌ ನಾಯಕ್‌