About the Author

ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಕುರುಬರ ಮಲ್ಲೂರು ಗ್ರಾಮದ ರಾಜಾ ಎಂ.ಬಿ ಯವರು ವೃತ್ತಿಯಿಂದ ಸರಕಾರಿ ಪ್ರೌಢಶಾಲಾ ಶಿಕ್ಷಕರು. ಮೂಲತಃ ಇಂಗ್ಲಿಷ್ ಭಾಷಾ ಶಿಕ್ಷಕರು. ಆದರೂ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದವರು. ಕನ್ನಡದಲ್ಲಿ ಬಹಳಷ್ಟು ಕವಿತೆಗಳನ್ನು, ಕತೆಗಳನ್ನು ಬರೆದಿದ್ದಾರೆ. ಹಲವಾರು ಗೀತೆಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ತರಂಗ, ಸಂಕಥನ, ಶಿಕ್ಷಣ ವಾರ್ತೆ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಪ್ರಬಂಧ, ಕವಿತೆಗಳು ಪ್ರಕಟಗೊಂಡಿವೆ.

ಕೃತಿಗಳು: ಕೋತಿ ಮತ್ತು ಗೋಧಿ ಹುಗ್ಗಿ

ರಾಜಾ ಎಂ.ಬಿ