About the Author

ಬಸವಕಲ್ಯಾಣದ  ಪತ್ರಕರ್ತ ಹಾಗೂ ಯುವ ಬರಹಗಾರ ರಾಜೇಂದ್ರ ಎಲ್.ಗೋಖಲೆ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ (ಬಿ) ಗ್ರಾಮದವರು. ತಂದೆ ಲಕ್ಷ್ಮಣ, ತಾಯಿ ರತ್ನಮ್ಮ. ಚಿತ್ರ ಕಲೆಯಲ್ಲಿ ಬಿ.ಎಫ್.ಎ  ಪದವೀಧರರು. 2002 ರಿಂದ ಪತ್ರಕರ್ತರು. ಬೀದರದ 'ಅಶೋಕಾ ಕೋಟೆ', :ಯುವ ರಂಗ', ಹಾಗೂ ಕಲಬುರ್ಗಿಯ 'ಕ್ರಾಂತಿ' ಮತ್ತು 'ಸಂಜೆವಾಣಿ',  ಪತ್ರಿಕೆಗಳ ಬಸವಕಲ್ಯಾಣ ತಾಲೂಕು ವರದಿಗಾರರು. ಸದ್ಯ 'ಕಲ್ಯಾಣ ಜಂಗ್ ' ದಿನ ಪತ್ರಿಕೆಯ ಸಂಪಾದಕರಾಗಿದ್ದಾರೆ. 2014 ರಿಂದ 2018 ರ ವರೆಗೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಸವಕಲ್ಯಾಣ ತಾಲೂಕು ಅಧ್ಯಕ್ಷರಾಗಿದ್ದರು. 

ಕೃತಿಗಳು: ಮಚ್ವೇಂದ್ರ ಅಣಕಲ್' ಅವರ ‘ದಲಿತ ಸಂವೇದನೆಯ ಕತೆಗಳು ' ಎಂಬ ಕಥಾ ಸಂಕಲನದ ಸಂಪಾದಕರು. ಇವರಿಗೆ ಕನ್ನಡ ಪರ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. 

ರಾಜೇಂದ್ರ ಎಲ್. ಗೋಖಲೆ

(10 Aug 1970)