About the Author

ಎಚ್.ಕೆ. ರಮೇಶ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಸಾಹಿತ್ಯ, ರಂಗಭೂಮಿ, ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಬರವಣಿಗೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕಥೆ, ಕವನ, ಅನುವಾದ, ನಿರೂಪಣೆ, ವೈಚಾರಿಕ ಬರಹ, ರಾಜಕೀಯ ವಿಶ್ಲೇಷಣೆ, ನಾಟಕ, ಸಿನಿಮಾ ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರವಾಗಿದ್ದು ಇವರ ಒಂದು ಕವನ ಸಂಕಲನ ಪ್ರಕಟವಾಗಿದೆ. ಜನಪರವಾದ ಸೈದ್ಧಾಂತಿಕ ನಿಲುವುಗಳಲ್ಲಿ ನಂಬಿಕೆ ಇಟ್ಟಿರುವ ಇವರು ಸೈದ್ಧಾಂತಿಕ ನಾಯಕರೊಂದಿಗೆ ರಾಜಕೀಯ ವಲಯದಲ್ಲಿ ತಮ್ಮ ಕೆಲಸಗಳನ್ನು ಮುಂದುವರೆಸಿದ್ದಾರೆ. ಎಚ್.ಸಿ. ಮಹದೇವಪ್ಪ ಅವರ ಸಮಕಾಲೀನ ರಾಜಕೀಯ ಚಿಂತನೆಗಳನ್ನು 'ಸಂವಿಧಾನದ ನೆರಳಿನಲ್ಲಿ' ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ. 

ರಮೇಶ್ ಎಚ್.ಕೆ