About the Author

ಲೇಖಕ ರವಿಕುಮಾರ ಜಾಧವ (ಸೋನೆ) ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿ ಸಾಲವಾಡಗಿ ಗ್ರಾಮದವರು (ಜನನ:  25.07.1994) ತಾಳಿಕೋಟೆಯಲ್ಲಿ ಪಿಯುಸಿ, ಎಸ್. ಕೆ. ಕಲಾ ಮತ್ತು ವಾಣಿಜ್ಯ ಕಾಲೇಜು, ಬಿಎ ಪದವಿ, ಕನ್ನಡ ವಿ.ವಿ.ಯಿಂದ ಎಂಎ (ಕನ್ನಡ)  ಪದವಿ ಪಡೆದರು.

ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ  'ಕಾವ್ಯ ಕಣ್ಮಣಿ' ಮತ್ತು 'ಕಾವ್ಯಸಿರಿ' ಪ್ರಶಸ್ತಿ ಪುರಸ್ಕೃತರು.  ರಾಷ್ಟ್ರ ಯುವ ಬರಹಗಾರರ ಒಕ್ಕೂಟ ರಾಣಿಬೆನ್ನೂರ ವತಿಯಿಂದ ಆಯೋಜಿಸಲ್ಪಟ್ಟ ಸ್ಪರ್ಧೆಯಲ್ಲಿ "ದುಡಿದು ತಿನ್ನುವ ಕೈಗಳು" ಕವಿತೆಗೆ ಪ್ರಥಮ ಸ್ಥಾನ ಬಂದಿದೆ. 

‘ಅವಿಜ್ಞಾನಿ ಸೋನೆ’ ಎಂಬುದು ಇವರ ಕಾವ್ಯನಾಮ.  ಕಥೆಗಳು (ಅಜ್ಜಿ ಹೇಳಿದ ಕಥೆ, ನ್ಯಾಯ ಕಾಣದ ಬದುಕು), ಲೇಖನಗಳು (ಕಾರ್ಮಿಕರ ಬದುಕು), (ಚಿರುವಿನ ನೆನಪು ಕಾಡುತ್ತಲೇ ಇದೆ), ಮತ್ತು ವಿಮರ್ಶೆಗಳು, ಪ್ರಕಟಗೊಂಡಿದೆ.  'ಒಳಿತು ಕೆಡುಕುಗಳ 'ಸಂತೆ' ಮಾಲ್ ಗಳಲ್ಲಿ ಮಾರಾಟ್ಟಕ್ಕಿದೆ' ಎಂಬುದು ಇವರ ಕವನ ಸಂಕಲನ.

 

ರವಿಕುಮಾರ ಜಾಧವ (ಸೋನೆ)