About the Author

ಲೇಖಕ ಎಸ್. ಎಸ್. ಆಲಗೂರ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಗೂರ ಗ್ರಾಮದವರು. ಎಂ.ಎ ಪದವೀಧರರು. ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಕರ್ನಾಟಕ ಸ್ನೇಹಗಂಗಾ ವಾಹಿನಿಯ ಮೂಲಕ ಸಮಾಜ ಸೇವೆ. ವಿಚಾರವಾದಿಯ ನೆಲೆಯಲ್ಲಿ ಹಲವು ಕೃತಿಗಳು ಪ್ರಕಟವಾಗಿದ್ದು,  ಮುಪ್ಪಿನ ಷಡಕ್ಷರಿ ಹಾಡುಗಳು ಪದವಿ ತರಗತಿಗೆ ಪಠ್ಯವಾಗಿತ್ತು  ಆಕಾಶವಾಣಿಯಲ್ಲಿ  ‘ವಿಚಾರ ದೀಪಿಕೆ’ ಕಾರ್ಯಕ್ರಮ ನೀಡುತ್ತಿದ್ದಾರೆ. 

ಎಸ್. ಎಸ್. ಆಲಗೂರ