About the Author

ಲೇಖಕ ಎಸ್. ಶಿವರಾಮು ಅವರು ಮೂಲತಃ ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದವರು. ಆಲಕೆರೆ, ಕೀಲಾರ. ಮಂಡ್ಯ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿರುತ್ತಾರೆ. ಇತಿಹಾಸದಲ್ಲಿ ಎಂ.ಎ ಪದವೀಧರರು. ನವದೆಹಲಿಯ ಇತಿಹಾಸ ಅನುಸಂಧಾನ ಪರಿಷತ್ತಿನ ಶಿಷ್ಯವೇತನ ಪಡೆದು ‘ಕೆ.ವಿ.ಶಂಕರಗೌಡರ ಜೀವನ, ಸಾಧನೆ’ ಕುರಿತ ಪ್ರೌಢಪ್ರಬಂಧ ಸಲ್ಲಿ (2004) ಪಿ.ಹೆಚ್.ಡಿ ಪಡೆದಿದ್ದಾರೆ. ಕೆ.ಪಿ.ಎಸ್.ಸಿ ಯಿಂದ (2009) ಇತಿಹಾಸ ಅಧ್ಯಾಪಕರಾಗಿ ನೇಮಕವಾದರು. ಪ್ರಸ್ತುತ, ಸರ್ಕಾರಿ ಕಾಲೇಜು, ಮಂಡ್ಯದಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಕೃತಿಗಳು : ಜನಸಾಮಾನ್ಯರ ವೈದ್ಯ ಡಾ.ಸಿ. ಬಂದೀಗೌಡ, ‘ಸಾಧಕಚೇತನ ಎ.ಜಿ. ಬಂದೀಗೌಡ’

ಎಸ್. ಶಿವರಾಮು