About the Author

ಎಸ್‌.ಸುನಂದ ಮೂಲತಃ ಚಿಂತಾಮಣಿ ತಾಲ್ಲೂಕು ಪಾತಪಲ್ಲಿ ಗ್ರಾಮದವರು. ಪ್ರಾಥಮಿಕ ಶಿಕ್ಷಣದ ನಂತರ, ಬೆ೦ಗಳೂರಿನ ವಿಮಾನಪುರದ ವಿಶ್ವೇಶ್ವರಯ್ಯ ಪ್ರೌಢಶಾಲೆ, ವೈಟ್‌ ಫೀಲ್ಡ್‌ ಸತ್ಯ ಸಾಯಿ ಬಾಬಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬಿ.ಎಮ್‌ಎಸ್‌ ಮಹಿಳಾ ಕಾಲೇಜಿನಿಂದ ಬಿಎ ಪದವಿ ಪಡೆದು ನಂತರ ಬೆಂಗಳೂರಿನ ಸಿಎಂ ಸ೦ಸ್ಥೆಯಲ್ಲಿ ಸೇವೆ ಸಲ್ಲಿಸುತ್ತಾ ಸಮಾಜಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಗಳಿಸಿದರು. ನಿವೃತ್ತಿ ನಂತರ ದೇವ ವಿಜ್ಞಾನ ಸಂಸ್ಥೆಯಲ್ಲಿ ಶ್ರೀ ಹರಿದಾಸ ಪರಂಪರೆಗೆ ಯಲಿಯೂರು ಶ್ರೀ ವೆಂಕಟಾಚಲದಾಸರ ಕೊಡುಗೆ' ವಿಷಯದಲ್ಲಿ ಎಂಫಿಲ್‌ ಹಾಗೂ ಡಾಕ್ಟರೇಟ್ ಪಡೆದಿದ್ದಾರೆ. ಸುನಂದ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು: ಕೀರ್ತನ ಶರಭ 

ಎಸ್‌. ಸುನಂದ