About the Author

ಡಾ. ಸಂಜೀವ ಕುಲಕರ್ಣಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದವರು. ಲೇಖಕರು ಹಾಗೂ ಅನುವಾದಕರು. ಕಳೆದ 32 ವರ್ಷಗಳಿಂದ ಧಾರವಾಡದಲ್ಲಿ ಹೆರಿಗೆ ಮತ್ತು ಸ್ತೀರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ,ಪರಿಸರ, ಆಧ್ಯಾತ್ಮ, ಧ್ಯಾನ, ಶಿಕ್ಷಣ ಇವರ ಆಸಕ್ತಿ ಕ್ಷೇತ್ರಗಳು. ’ ಬಾಲ ಬಳಗ’ ಮುಕ್ತ ಮಾದರಿಯ ಶಾಲೆಯ ಕಾರ್ಯಾಧ್ಯಕ್ಷರಾಗಿದ್ದು, ಧಾರವಾಡದಿಂದ 10 ಕಿ.ಮೀ ದೂರದಲ್ಲಿ ‘ಸುಮನ ಸಂಗಮ’ ಕಾಡು ತೋಟದಲ್ಲಿ ಪರಿಸರ ಸ್ನೇಹಿ ಕೃಷಿಯ ಪ್ರಯತ್ನ ಮಾಡಿರುತ್ತಾರೆ. ‘ಸ್ವಯಂ ದೀಪ ಝೆನ್ ಕೇಂದ್ರ’ ಅಧ್ಯಕ್ಷರಾಗಿದ್ದಾರೆ.

ಕೃತಿಗಳು ; ಮೊದಲ ಹೆಜ್ಜೆಗಳು, ಸಾವಿರದ ಬೇವಿನ ನೆರಳು, ಪರಿಸರ ಸ್ವದೇಶಿ ವಿಚಾರದ ಪುಸ್ತಕ, ಒಂದು ಬೊಗಸೆ ಧ್ಯಾನ

ಸಂಜೀವ ಕುಲಕರ್ಣಿ