About the Author

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಅವರು ಮೂಲತಃ ಕಾಂತಾವರದವರು. ಪ್ರಸ್ತುತ ನಿವೃತ್ತ ಶಿಕ್ಷಕಿ. ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸಾಕ್ಷರತಾ ಆಂದೋಲನ, ಪರಿಸರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಂಸ್ಕೃತಿಕ ಸೇವೆಗೆ ನಿಂತವರು. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗಳು, ದೆಹಲಿಯ ಬಾಬು ಜಗಜೀವನರಾಂ ಫೌಂಡೇಶನ್ ನೀಡುವ ಸಾವಿತ್ರಿ ಬಾಯಿ ಫುಲೆ ನ್ಯಾಷನಲ್ ಫೆಲೋಶಿಪ್ ಅವಾರ್ಡ್ ಇತ್ಯಾದಿ ಪ್ರಶಸ್ತ್ತಿಗಳು ಸಂದಿವೆ. ‘ಪ್ರಸ್ತುತ’ ಅವರ ಪ್ರಮುಖ ಕೃತಿ. 

ಸರೋಜಿನಿ ನಾಗಪ್ಪಯ್ಯ