About the Author

ಯುವ ಲೇಖಕಿಯಾದ ಶಭಾನ ಮೈಸೂರು, ಟಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಗ್ರಾಮದವರು. ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅರವಿಂದ ಮಾಲಗತ್ತಿ ಅವರ ಮಾರ್ಗದರ್ಶನದಲ್ಲಿ ಪೂರ್ಣಕಾಲಿಕ ಸಂಶೋಧನೆ ನಡೆಸುತ್ತಿದ್ದಾರೆ. ಬೇಂದ್ರೆ ಕಾವ್ಯ ಕೂಟ(ನೋಂ.)ದ ಬಹುಮಾನವನ್ನೂ ಒಳಗೊಂಡಂತೆ ಇತರ ಬಹುಮಾನಗಳನ್ನು ಪಡೆದಿರುವ ಇವರು ಸಮಾಜಮುಖಿ, ಸಂಗಾತ, ಆಂದೋಲನ ಸೇರಿದಂತೆ ಇತರ ನಿಯತಕಾಲಿಕೆಗಳಲ್ಲಿ ಬರೆಹಗಳನ್ನು, ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಹೊಸತಲೆಮಾರಿನ ಕಥೆ-ಕಾವ್ಯದಲ್ಲಿ ವಿಶೇಷ ಅಧ್ಯಯನ ಮತ್ತು ಆಸಕ್ತಿ ಹೊಂದಿರುವ ಇವರ ಮೊದಲ ಸಂಪಾದಿತ ಪುಸ್ತಕ ‘ದರ್ಶನ ಸರಸ್ವತಿ’ಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ.

ಶಭಾನ